ಉಸಿರಾಡುವುದೇ ಶಿಕ್ಷೆಯಾಗುತ್ತಿದೆ ಈಗ
ಸಾವಿನ ಸನಿಹ ದೂರವಾಗಹತ್ತಿದೆ
ನೋಡಿದರಲ್ಲಲ್ಲೆ ವಿಕಸಿತಗೊಳ್ಳುತ್ತಿದೆ ಮರಣ
ಜೀವ ಹಿಂಡುವಂತಾಗಿದೆ ಹರಣ.
ಏಳುತ್ತಿರುವರಲ್ಲಲ್ಲೆ ನೋವಿನಧಿಪತಿಗಳು
ಹಿಂಜರಿಯುತ್ತಿದೆ ಧೈರ್ಯ ಶಂಕೆಯಲ್ಲಿ
ಆಡಾಡಿ ಬಂದಂತಿದೆ ಗೋರಿಗಳ ಸಾಲು
ಅಳತೆ ಹುಡುಕಹತ್ತಿದೆ ಮನಸ್ಸು.
ಬೆಳಕು ಮರಣಹೊಂದಿ ಕತ್ತಲಾಕ್ರಮಿಸುತ್ತಿದೆ
ಮನಸ ಒಳಕೂಗು ಗೂಬೆಯಾಗಿದೆ
ದೇಹವಿಲ್ಲದೇ ಹಣಕುತ್ತಿರುವ ಕಣ್ಣೋಟಗಳು
ಪಿಸುದನಿಗಳಲ್ಲಿ ಕಿರುಚಹತ್ತಿವೆ.
ನೋಡಿದವರಿಲ್ಲ ದಾರಿ ಬಂಜರಿನ ನಡುವೆ
ಬಳ್ಳಿಗಳಲ್ಲೆಲ್ಲ ಹೆಣಗಳ ಮಾಲೆ
ತಿರುಗಿದರೆ ಜೀವನದ ಋಣದಾರ್ಜನ
ಬೆಳ್ಳಿ ಪರದೆಯ ಮೇಲೆ ಪುನರಾವರ್ತನ.
ಮಾಡಿದ್ದಕ್ಕೆಲ್ಲ ಕಾರಣವ ಹುಡುಕಿದೆ ಮನ
ಒಪ್ಪಲೊಲ್ಲದು ಸತ್ಯ - ಭಯದಲ್ಲಿ,
ನಿಜ ಹೇಳಲೂ ಭಯ, ಸುಳ್ಳಿನಲಿ ಶಂಕೆ
ಈ ಭಯಸಾಗರದಿಂದೆಂದೂ ಬರಲಾರದು ಹೊರಗೆ.
No comments:
Post a Comment