Tuesday, June 16, 2009

ಕರ್ಮದ ಜನರು

ಕನಸ ಬತ್ತಲು ಮಾಡಿ ನೋಡಿದರೆ
ಎಳೆ ಎಳೆಯಲ್ಲೂ ಸೌಂದರ್ಯ
ಮನಸ ಬತ್ತಲುಗೊಳಿಸಿ ಹುಡುಕಾಡಿದರೆ
ಆಳದಲೆಲ್ಲವೂ ವಿಪರ್ಯಾಸ.
ಬಂಜರು ಎದೆಯೊಳಗೆ ಬಳ್ಳಿ ಬೇರಿಟ್ಟು
ಹೂ ಬಿಟ್ಟು ನಗುತ್ತಿದೆಯೆನಲು
ಹೊನಲ ಬಿರುಗಾಳಿ ಅಲೆಗಳನಿಟ್ಟು
ಚೂ-ಬಿಟ್ಟಿದೆ ಕುಹಕದನಲ.
ನಗರದ ಕತ್ತಲ ಸೀಳಿ ಬಾನಿಗೆ ಮೊರೆಯ
-ನೊಡ್ಡಿರುವ ನರಿಯ ದನಿಗೆ
ಛೀ-ಕಾರವ ಹಾಕಿರುವ ಜನಕೋಟಿಯ
ಭಾವಗಳ ಕೆದೆಕಿ ನೋಡಿದರೆ
ನೂರಾರು ನರಿಗಳ ಕೂಗಾಟ -
ಮೂರ್ಚೆ ಹೋಗುವ ಕನಸ ನಡುವೆ
ಸತ್ತು ಬಿದ್ದ ಮನಸ್ಸಿನ ಅಂತಿಮದ ಪಯಣಕ್ಕೆ
ಹೆಣವ ಹೊರಲು ಬಾಳಿನ ಬಿದಿರು
ಭುಜವೊಡ್ಡಲು ಕರ್ಮದ ಜನರು!

1 comment:

ಭೂಮಿ-ಸಾಗರ said...

ಮನಸ ಬತ್ತಲುಗೊಳಿಸಿ ಹುಡುಕಾಡಿದರೆ
ಆಳದಲೆಲ್ಲವೂ ವಿಪರ್ಯಾಸ.

-good one.