ಕಂದರದ ಹೊದರಿನೊಳಗೆ
ನಾ ಬದುಕುಳಿಯಲು
ಆ ಜೀವ ಚೇತನದ ಕಿಡಿ
ಬರುವುದೆಂದೋ?
ಅಂದಿನವರೆಗು
ನಾ ಈ ಸಮಾಧಿಯೊಳು
ಪರಿವೇಷ ಕಾಣದಿಹ
ಕುರುಡನಂತಿರುವೆ;
ಬರುವನಾದರೊ ಚಂದ್ರ
ಗ್ರಹಣ ಕೆಣಕುತಿರುವನು -
ಅನಿಸಿಕೆಯನೇ ಮುತ್ತಿರಲು
ಅಣಕು ಪರಿಯು.
ಚಿತೆಯೇ ಭಸ್ಮವಾಗದಿರಲು
ಚಿಂತೆಯೇತಕೆ
ನಿಸ್ವನವಾಗಿಹುದು,
ಮಾಟಗಾರ(ತಿ)ನ(ಯ)ವನೋ(ಳೋ)
ಬರುವುದಾದರೆ
ನಾ ಕುಣಿಯುವೆ ಅವನ(ಳ)
ಮಡಿಲಲಿ.