ಬಾಂದಳ ವೃಂದದ
ಅಸ್ತಮ ಉದಯದಿ
ದಿನಕಳೆದಂತದಿ
ಕರಗುವ ರಾತ್ರಿಯು,
ತಿಂಗಳ ಕಳೆದಿರೆ
ಮುಂಬರೆ ಋತುಗಳು
ಬಗೆ ಬಗೆ ಭಾವನೆ
ಋತು ಕವನ,
ಅಂತೆಯೆ ನನ್ನೆಯ
ಎದೆಯೊಳಗಿರುವ
ಕಾಲಕೆ ಹೊಂದುವ
ಹಳೆ ಹಾಡು.
ಬೇಸಗೆ ಬಿಸಿಲಿನ
ಮೈ ಕೊರೆಯುವ ಛಳಿ
ಚೈತ್ರದಲ್ಲಿನಾ ಕೋಗಿಲೆಯು,
ನನ್ನೊಡನಿರುವ
ಈ ಬಗೆ ಪಂತಕೆ
ನನ್ನೆಯ ಹಳೆಯ
ಜೀವನ ಸ್ಮರಣ
ನನ್ನೆಯ ಹಣೆಬರ
ಹನಿಗವನ.
Thursday, September 29, 2011
Monday, September 19, 2011
ಪತನ
ಸವತಿಯ ಅಸುರ ನೆರಳಿನಲಿ
ಆ ಜೇನ ಮೇಲಿನ ಸವಿಯು
ಪಸೆಕಟ್ಟಿ ಪಸುರದನೆ
ಒಳಗನೇ ಅಡಗಿಸಿಹುದು.
ಇದಾವುದೀ ಸೆರೆ, ಸೂರೆಯಾಗಿಸಿಹುದು
ಸುಂಕವನೆ! ಎದೆ ಹೆಡೆಯಾಡಿ
ನಾಗನಾವಶೆಷದ
ಪೊರೆಯ ಕಳಚಿಹುದು.
ಇಂತಿರಲು ಕ್ರಾಂತಿ ತಾ
ಮನದೊಳಗೆಯೆ ಅಡಗಿ
ತಾ ಬೆಳೆಸಿ ಬಿಟ್ಟ ಆ
ಭವ್ಯ ಭವನದೊಳು.
ದಿಗಂತಲಿಹ ಮರದ
ಹೊದರಿನೊಳು, ಕೋಗಿಲೆಯ
ಸವಿ ಕಂಠ.
ಹಾ! ಚೈತ್ರ ಋತು,
ಇಂತಹುದೆ ಬರಲಿಹುದು
ಬರಲಾರವಿಂದು
ಏಕೆಂದು ಹೇಳಲಿ, ಹಳಿಯುತಿಹುದು.
ಈ ಮನುಜ ಕುಲಕೋಟಿ
ಫಲವಿಡುವ ಪಾಠದಲಿ
ಪೇಟೆಯಾ ಬೀದಿಯಲಿ
ರಾಟೆ ಹಾಕಿಹರು,
ಒಳಗಿರುವ ಬಾವಿಯಲಿ
ನೀರು ತಾನಿಲ್ಲ, ಇಂತಿರಲು
ಸವತಿಯಾ ಸವತಿಯೊಳು
ಬದುಕಿರದ ಭವನ
ತನ್ನೊಳಗೇ ತೆರಳಿಹುದು
ಋತುಋತುವಿನ ಪತನದಾ
ಸವಿದನಿಯ ಕೋಗಿಲೆಯಲಿ -
ಇಂತಿಹುದೆ! ಅಂತಹುದೆ!
ನಂಜಿಹುದು ಪುಂಜದಲಿ.
ಆ ಜೇನ ಮೇಲಿನ ಸವಿಯು
ಪಸೆಕಟ್ಟಿ ಪಸುರದನೆ
ಒಳಗನೇ ಅಡಗಿಸಿಹುದು.
ಇದಾವುದೀ ಸೆರೆ, ಸೂರೆಯಾಗಿಸಿಹುದು
ಸುಂಕವನೆ! ಎದೆ ಹೆಡೆಯಾಡಿ
ನಾಗನಾವಶೆಷದ
ಪೊರೆಯ ಕಳಚಿಹುದು.
ಇಂತಿರಲು ಕ್ರಾಂತಿ ತಾ
ಮನದೊಳಗೆಯೆ ಅಡಗಿ
ತಾ ಬೆಳೆಸಿ ಬಿಟ್ಟ ಆ
ಭವ್ಯ ಭವನದೊಳು.
ದಿಗಂತಲಿಹ ಮರದ
ಹೊದರಿನೊಳು, ಕೋಗಿಲೆಯ
ಸವಿ ಕಂಠ.
ಹಾ! ಚೈತ್ರ ಋತು,
ಇಂತಹುದೆ ಬರಲಿಹುದು
ಬರಲಾರವಿಂದು
ಏಕೆಂದು ಹೇಳಲಿ, ಹಳಿಯುತಿಹುದು.
ಈ ಮನುಜ ಕುಲಕೋಟಿ
ಫಲವಿಡುವ ಪಾಠದಲಿ
ಪೇಟೆಯಾ ಬೀದಿಯಲಿ
ರಾಟೆ ಹಾಕಿಹರು,
ಒಳಗಿರುವ ಬಾವಿಯಲಿ
ನೀರು ತಾನಿಲ್ಲ, ಇಂತಿರಲು
ಸವತಿಯಾ ಸವತಿಯೊಳು
ಬದುಕಿರದ ಭವನ
ತನ್ನೊಳಗೇ ತೆರಳಿಹುದು
ಋತುಋತುವಿನ ಪತನದಾ
ಸವಿದನಿಯ ಕೋಗಿಲೆಯಲಿ -
ಇಂತಿಹುದೆ! ಅಂತಹುದೆ!
ನಂಜಿಹುದು ಪುಂಜದಲಿ.
Subscribe to:
Posts (Atom)