Thursday, July 21, 2011

ಸಾಕ್ಷಿ ಬೇಕೆ

ವೈಭವವೇತಕೆ ಬೇಕು
ರಾಜನಿಲ್ಲದ ಊರಲಿ
ಭಕುತಿಯ ಹೊನಲ ಹರಿಸಬೇಕೆ
ದೇವರಿಲ್ಲದ ಗುಡಿಯಲಿ,
ಮಾವಿನ ತಳಿರು ಇರಬೇಕೇತಕೆ
ಹರಷವಿಲ್ಲದ ಆಲಯದಿ
ನೀನಿಲ್ಲದಿರೆ - ಬೇಕೇತಕೆ ಪ್ರೀತಿ -
ತುಂಬಿದ ಜೀವ ನದಿ.

ಕರೆವ ದನಿ ಇರಲೆ ಬೇಕು
ಕೊರೆವ ರಾತ್ರಿಯ ಛಳಿಗೆ
ಇರಲಿ ಎಂದೊಡೆ ಹರಿಯಬಹುದೆ
ಬರಿದೆ ಬಯಕೆಯ ಪರಿಗೆ,
ಬಂದುಬಿಡು ಎಂದೊಡನೆ ಇಣುಕಿ
ನೋಡುತ್ತಿದ್ದ ಆ ಹೃದಯ
ಮಾಯವೇನೋ ಎಂದಡಿಗಿದೆ
ತಾನೆ ಬಯಸದ ಬಗೆಯ.

ಮನವೇತಕೆ ಬೇಕು
ಹೃದಯವಿದ್ದರೆ ಸಾಕಲ್ಲವೆ
ನೀ ಬರುವ ಹಾದಿಗೆ ತೋರಣಬೇಕೆ
ಹಸಿರೆಲ್ಲವು ನಿನ್ನ ನಗೆ,
ಹೆಜ್ಜೆಯ ಗದ್ದಲವಿಲ್ಲ
ಬೆಲ್ಲವ ಸವಿಯಬಲ್ಲ ಸನಿಹಕೆ
ಸಾಕ್ಷಿಯೇತಕೆ ಬೇಕು ಹೇಳು
ನಿನ್ನ ವಿನಹ ನಾನಿಲ್ಲವೆಂಬುದಕೆ.

2 comments:

Mandasmita said...

ಬೆಲ್ಲವ ಸವಿಯಬಲ್ಲ ಸನಿಹಕೆ ಸಾಕ್ಷಿಯೇತಕೆ ಬೇಕು ಹೇಳು
ನಿನ್ನ ವಿನಹ ನಾನಿಲ್ಲವೆಂಬುದಕೆ.....Very nice poem. Your page is also looking colourful. Good change!

Pani Murthy said...

I did not want to make it all doom and gloom. SO, I thought a little color would help.

Thanks for your response.