Wednesday, July 20, 2011

ಹೃದಯದ ಅಳಲು

ಮನಸ ಮರೆತು ಬದುಕುವುದ ಕಲಿ ಹೇ! ಜೀವ
ಛಿದ್ರವಾದರೇನೀಗ ಹೃದಯ - ಚಿಂತೆ ಇರುವುದಿಲ್ಲ ನಿನಗೆ;
ಬದುಕಿದ್ದೂ ಸತ್ತಂತೆ ಮಾಡುವುದೇ - ಮನಸು
ಅದರ ಹೊಂಚನ್ನು ತಿಳಿಯುವುದರಲ್ಲೆ ಅರ್ಧವಾಗುವುದೀ ಆಯಸ್ಸು.

ಏಕಾದೆವು ನಾವು, ಛೀ ಮತ್ತೆ ಮನಸ್ಸಿನದೇ ಚಾಲನೆ
ಪ್ರಕೃತಿ ಸೊಕ್ಕಿನಲ್ಲಿ - ಅಳತೆಗೆ ಅರಿವಿರುವುದೆ?
ಹೃದಯ ಗೆಲ್ಲುವುದಕೆ ಮನೋಬಲದ ಅಗತ್ಯವೇಕೆ ಎಂದರೆ
ನಾನು ಗೆದ್ದೆನೆಂದು ಕುಹಕದಲಿ ನುಗುತ್ತದೆ - ಮನಸು.

ಮನಸ್ಸಿನದೆ ಮೇಲು ಹೃದಯ ಕ್ಷುಲ್ಲಕವಾದೊಡೆ
ಬಾಳು ಏತಕೆ ಎಂಬುದ ಕೇಳಿದರೆ ನಕ್ಕಾರು ಎಲ್ಲರು,
ಬದುಕುಳಿ - ಹೃದಯದ ಅಗತ್ಯವಿಲ್ಲ ಎಂದೆಲ್ಲ ಸಾರುವವರಿಗೆ
ಮನಸ್ಸ ಮಿಠಾಯಿಯ ರುಚಿಯಲ್ಲಿ ಹೃದಯದ ಸಿಹಿ - ಬೇಕೆ?

2 comments:

Anonymous said...

ಅಬ್ಬಾ! ಹೃದಯ ಮತ್ತು ಮನಸ್ಸುಗಳ ದ್ವಂದ್ವತೆ ನಿಭಾಯಿಸುವುದು ಎಷ್ಟು ಕಷ್ಟ. ಮನಸ್ಸು ಒಪ್ಪದಿದ್ದರೆ ಹೃದಯ ತುಂಬಲಾರದು. ಅದನ್ನು ನಿಭಾಯಿಸಲು ಖಂಡಿತ ಒಂದೇ ಮಾರ್ಗ. ಅದು ದೈವ ಮಾರ್ಗ!. ಹೃದಯ ಮತ್ತು ಮನಸ್ಸುಗಳಲ್ಲಿ ದೈವತ್ವವನ್ನು ತುಂಬಿಕೊಂಡರೆ ಬೇರೆ ಎಲ್ಲ ಕ್ಷುಲ್ಲಕವೆನಿಸುತ್ತದೆ. ಜೊತೆಗೆ ಆ ದೇವರು ಕೊಟ್ಟ ಕೊಡುಗೆಯನ್ನು ಹೇಗೆ ನಾವು ಎನನ್ನಾದರೂ ಸಾಧಿಸಲು ಉಪಯೋಗಿಸುತ್ತೇವೆ ನೋಡಬೇಕು. ದೈವತ್ವವಿದ್ದೊಡೆ ಮಾನವೀಯತೆ ಇರುತ್ತದೆ. ಮಾನವೀಯತೆಯಿಂದ ಇತರ ಮನಸ್ಸುಗಳನ್ನು ಮುಟ್ಟಿದರೆ ಮನಶ್ಯಾಂತಿ ಸಿಗಬಹುದು! ಒಂದು ವಿಷಯ ತಿಳಿಯುವ ಕುತೂಹಲ...ಮನಸ್ಸು ಮತ್ತು ಹೃದಯ ಎರಡನ್ನೂ ತುಂಬುವ ಅವಕಾಶ ಸಿಕ್ಕಾಗ ಅದರ ಅರಿವು ಮೂಡಿಸುವ ಶಕ್ತಿ ಯಾವುದು..ಅದು...ವಿಧಿಯೇ? OR Is it that 'Whatever happens, happens for good',

Pani Murthy said...

ದೈವವಿದೆಯೆಂಬ ಅರಿವಾಗಬೇಕಾದರೆ ಮನಸ್ಸು ಮತ್ತು ಹೃದಯ ಒಂದಾಗಬೇಕು. ಇವೆರಡರ ಚಲಾವಣೆಯಲ್ಲಿ ಮುಸುಕೆಳೆದು ಕುಳಿತರೆ ಅದು ಬದುಕೆ? ಎಲ್ಲವೂ ಇದ್ದಂತೆಯೇ ಇರಲಿ ಎಂದೊಡೆ ಶಾಂತಿ ದೊರಕುವುದೆಂಬುದ ನಂಬಲಾರೆ.

ಅನಿಸಿಕೆಗಳ ವ್ಯಕ್ತಪಡಿಸಿರುವುದಕೆ ನಾನು ಧನ್ಯ.

ವಂದನೆಗಳು