ಇನ್ನೇನು ಹೇಳಿದರೂ ನಮ್ಮ ನಡುವಿನ
ಈ ಮೌನದ ತೆರೆ ಸರಿಯಲಾರದು
ಅರಿತು ಪ್ರೀತಿಸುತಿದ್ದೀವೆಂದು ಹೇಳುವಾಗ ಅಂದು
ಇಂತಹುದೊಂದು ಮೌನ ಹಬ್ಬಿತ್ತು;
ಹೊಸ ಬಾಳಿಗೊಂದು ಪ್ರಾರ್ಥನೆಯೆಂಬ ಮೌನ
ಇಂದು ಅಂತಿಮದ ವಿಧಾಯವಗಿದೆ.
ಹೇಳಲೇನು ಉಳಿದಿದೆ, ಬೆಟ್ಟ ಹಬ್ಬಿಬಿಟ್ಟಿದೆ,
ಕಣ್ಸನ್ನೆಯಲ್ಲೇ ಹೇಳಬಹುದಿತ್ತು-
ಇಂದು ಎಲ್ಲವನ್ನ ಕೇಳಿದರೂ ಅರ್ಥದಿಂದಾಚೆ ಉಳಿದಿದೆ
ದೃಷ್ಟಿ, ದೃಷ್ಟಿಯಲ್ಲಿ ಹಾದಿ ಹುಡುಕಿದೆ;
ಬಳಿಯೆ ಬಂದು ಕುಳಿತು, ಅಪ್ಪಿ ಒಪ್ಪಿಸಿದರೂ
ಲೋಕದಲ್ಲೇ ಇಲ್ಲ - ಈ ಹೃದಯ.
ಇದೇತಕ್ಕೆ ಬೇಕಿತ್ತು, ಈ ರೀತಿ, ಈ ಬದುಕು
ಹೀಗೊಂದು ಪ್ರೀತಿ ಇರದಿದ್ದರೇನು?
ಎಲ್ಲವೂ ಕಾಣುತ್ತಲಿದೆ ಎಂದು ಹೇಳಿ ಹೊಗಳುವಾಗ
ಭಿನ್ನವಾಯಿತೇಕೆ ನಮ್ಮ ಪ್ರೀತಿಯೊಕ್ಕಣಿ;
ನೈಜತೆಯ ನಡುವಿನಲ್ಲಿ ಅಗೋಚರವಾದ ಕವನವ
ದಿಗಂತದಲ್ಲಿ ಹಾಡುತ್ತಿದ್ದಾನೆ - ಕವಿ!
No comments:
Post a Comment