ಮನವೇತಕೆ ಹೀಗೆ ಮಿಡಿಯುತ್ತಿದೆ
ಪ್ರಕೃತಿಯಲ್ಲೆಲ್ಲೆಡೆ ಮೌನ
ಕನಸಿನಲ್ಲೆಲ್ಲೋ ವಸಂತವಾದುದಕ್ಕೆ
ಪಕ್ಷಿಗಳ ದನಿತೂರುವೆನೆನುತಿದೆ.
ನಿನ್ನೆ ತಾಳೆಯಾದ ಪ್ರೀತಿ ನವುರಿಗೆ
ಜನ್ಮಗಳ ಬಂಧವೆನಲು ಎದೆ
ಅಭಿಸಾರದಿ ಹಾಲು ಬೆಳೆದಿಂಗಳೆಂಬ
ಹೆಸರನ್ನಿಟ್ಟಿದೆ, ಹೆಸರ ಹರಸಿದೆ.
ಕಣ್ಣಿನಲ್ಲೆ ಕವನ ಕಟ್ಟುವೆನೆಂದು
ಭಾಷೆಗೆ ಬೆಲೆಯ ಕಳೆಯುತ
ಹೊನ್ನಾಡಿನಲ್ಲಿ ಸಂಗಾತಿಯೊಡಗೂಡಿ
ಪಯಣವ ಹಮ್ಮಿದೆ ಅನಂತಕ್ಕೆ.
No comments:
Post a Comment