Monday, September 19, 2011

ಪತನ

ಸವತಿಯ ಅಸುರ ನೆರಳಿನಲಿ
ಆ ಜೇನ ಮೇಲಿನ ಸವಿಯು
ಪಸೆಕಟ್ಟಿ ಪಸುರದನೆ
ಒಳಗನೇ ಅಡಗಿಸಿಹುದು.
ಇದಾವುದೀ ಸೆರೆ, ಸೂರೆಯಾಗಿಸಿಹುದು
ಸುಂಕವನೆ! ಎದೆ ಹೆಡೆಯಾಡಿ
ನಾಗನಾವಶೆಷದ
ಪೊರೆಯ ಕಳಚಿಹುದು.
ಇಂತಿರಲು ಕ್ರಾಂತಿ ತಾ
ಮನದೊಳಗೆಯೆ ಅಡಗಿ
ತಾ ಬೆಳೆಸಿ ಬಿಟ್ಟ ಆ
ಭವ್ಯ ಭವನದೊಳು.
ದಿಗಂತಲಿಹ ಮರದ
ಹೊದರಿನೊಳು, ಕೋಗಿಲೆಯ
ಸವಿ ಕಂಠ.
ಹಾ! ಚೈತ್ರ ಋತು,
ಇಂತಹುದೆ ಬರಲಿಹುದು
ಬರಲಾರವಿಂದು
ಏಕೆಂದು ಹೇಳಲಿ, ಹಳಿಯುತಿಹುದು.
ಈ ಮನುಜ ಕುಲಕೋಟಿ
ಫಲವಿಡುವ ಪಾಠದಲಿ
ಪೇಟೆಯಾ ಬೀದಿಯಲಿ
ರಾಟೆ ಹಾಕಿಹರು,
ಒಳಗಿರುವ ಬಾವಿಯಲಿ
ನೀರು ತಾನಿಲ್ಲ, ಇಂತಿರಲು
ಸವತಿಯಾ ಸವತಿಯೊಳು
ಬದುಕಿರದ ಭವನ
ತನ್ನೊಳಗೇ ತೆರಳಿಹುದು
ಋತುಋತುವಿನ ಪತನದಾ
ಸವಿದನಿಯ ಕೋಗಿಲೆಯಲಿ -
ಇಂತಿಹುದೆ! ಅಂತಹುದೆ!
ನಂಜಿಹುದು ಪುಂಜದಲಿ.

1 comment:

Anonymous said...

Is this poem on 'Irene'?!