Friday, May 3, 2019

ಪ್ರಶ್ನೆ


ಮಂತ್ರಗಳ ಮರೆಯಲಿ ಅವಿತ ಧರ್ಮ
ಅವಿಚಾರದ ಆಚಾರದ ಹೆಡಿಗೆಯ ತಳದಿ
ಉಳಿದು ಕುಳಿತ ಅಗುಳಿಗೆ ಹಾತೊರೆವ
ಕಾಗೆಗಳ ದೊಂಬರಾಟದೊಳು
ಮುಕ್ತಿ ಪಡೆಯುವೆವೆಂಬ ನಂಬಿಕೆಯಲಿ
ಗೋಪುರದ ತೇರಿಗೆ ಹೂವ ಹೊದ್ದಿಸುವ
ತೆಳು ಮನಸ್ಸಿನ ತಿಳಿ ಹೃದಯದವಗೆ
ನಂಬಿಕೆ ಬೇಕಲ್ಲವೆ, ಭಕುತಿಗೆ ಬರವೆ!

No comments: