Monday, September 7, 2009

ಕನಸು

ಒಮ್ಮೆ ಬಂದು ಹೋಗಿ
ಮತ್ತೊಮ್ಮೆ ಬಾರದಿಹ
ಎಂಥದೋ ಕನಸುಗಳು
ಕಾಡುತಿವೆ ಎನ್ನ.

ಚೈತ್ರ ಋತು ಬಂದಾಗ
ವಸಂತದಾ ಕನಸು
ಋತುಮಾನ ರಂಗಿನ
ಮನಸಿನಾ ಭ್ರಮಿಸು,
ಉಳು ನೇಗಿಲ ಗತಿಗೆ
ಸುಗ್ಗಿ ಪರಿಯ ಅನಿಸು
ಅಂತೆಯೇ ಇಂತಿರಲು
ನನಸು ತಾ ಮುನಿಸು.

ಉಸಿರಿರುವ ಜೀವಕ್ಕೆ
ದೇವಲೋಕದಾ ಕನಸು
ಇಹೆಗೆ ಬಾರದದು
ಇಹಲೋಕಕೆ,
ಮಾಲಿನಿಯವಳಿಗೆ
ಹೂ ಮುಡಿಯುವ ಕನಸು
ಅಂತೆಯೇ ಇಂತಿರಲು
ನನಸು ತಾ ಮುನಿಸು.

ಬಾಹು ಬಂಧನದೊಳಿರಲು
ಆ ಪ್ರಿಯ-ಗೆ ಕನಸು
ಬಾಹು ಗಾಳಿಯಂತಿರಲು
ಸೋಕಿ ಹೋಗುವುದು,
ಅಪ್ಪಿ ಮುತ್ತಿಡುವಾಸೆ
ಕನಸಿನಾ ಕನಸು
ಅಂತೆಯೇ ಇಂತಿರಲು
ನನಸು ತಾ ಮುನಿಸು.

No comments: