ಓಕುಳಿ ಅಂಬರ ಧರಿಸಿಹ ಭೂಮಿ
ಅಂಬರಾಂಗಗಳ ಚಿತ್ತಾರ,
ಶರಧಿ ಚಾದರವ ಹೊದ್ದಾ ನೆಲವಿದು
ಅನಿಶ ಎಡವನ ಪ್ರಸ್ತಾರ.
ಮೂಡಲ ಓರಣ ಮೇಡುಗಳಿಗೆ
ಬಣ್ಣವಿಹಿಸಿಹ ರವಿ ಶೋಭೆ,
ಹೂನಗೆ ಹೊಮ್ಮುವ ಔಡಲ ನೆಲವಿದು
ಜ್ಯೋತಿಷ್ಮತಿಯಲಿ ಪ್ರಭೂತೆ.
ಇರುಳು ಮಸುಕಿನ ಮಾದಕತೆಯಲಿ
ಅಭಿನವ ದುಂಬಿಯ ಝೇಂಕಾರ,
ಬೆಳಗು ಪ್ರಭುವಿನ ಸ್ಮರಣೆಯಲಿ
ತನನನ ಕುಣಿದಿಹುದೀ ದೇಹ.
ನಿನ್ನೆಯ ಕಿಂಕರದಾಚೆ ಜಾಡಿನಲಿ
ಇಂದಿನ ಹೊಸತನ ಹೊಸಚೇತ,
ಪ್ರಸ್ತುತ ಬದುಕಿನ ದಿವ್ಯಸ್ಮರಣದಿ
ಮಾಡಿ ಚಿಂತೆಗಳ ಅಂಗಾರ.
ದುಃಖ ಸುಖಗಳ ಎರಕವಾಹೊಯ್ದು
ಮೂಡಿಸಿ ಹೊಸತನ ಮನಸಿನಲಿ,
ಇಂದಿನದಿಂದಿಗೆ - ನಾಳೆ ನಾಳೆಗೆ
ಹಾಡುವ ನಾವ್ ದೇವತಾರ್ಚನೆಯಲಿ.
No comments:
Post a Comment